ದಿಲೀಪ್ ರಾಜ್ ವ್ಯಕ್ತಿತ್ವವನ್ನು ಹೊಗಳಿದ ಯೋಗರಾಜ್ ಭಟ್
ಕನ್ನಡದ ಪ್ರಸಿದ್ಧ ನಟ, ನಿರ್ಮಾಪಕ, ನಿರ್ದೇಶಕ ದಿಲೀಪ್ ರಾಜ್ ಅಗಲಿಕೆಗೆ ಇಡೀ ಚಂದನವನವೇ ಕಂಬನಿ ಮಿಡಿಯುತ್ತಿದೆ.ಇದೀಗ ಯೋಗರಾಜ್ ಭಟ್ ಅವರು ದಿಲೀಪ್ ರಾಜ್ ಅವರ ವ್ಯಕ್ತಿತ್ವವನ್ನ ಹೊಗಳಿದ್ದಾರೆ.ಇಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರೀತಿಯ ದಿಲೀಪ್ ಹೋಗಿ ಬನ್ನಿ, ಇದು ಪ್ರಕೃತಿ ಕೆಲವೊಬ್ಬರ ಜೊತೆ ಅವಸರದಿಂದ ವರ್ಥಿಸುವುದಕ್ಕೆ ನಿದರ್ಶನ… ನಿಮ್ಮ ನೆನಪು ಎಂದಿಗೂ ಜೀವಂತ… ನೈಜ ಕಲಾವಿದನ ಬಾಳು, ಸಭ್ಯ ವ್ಯಕ್ತಿತ್ವಕ್ಕೆ ನಮನ… ಎಂದು ತಮ್ಮ ಸಂತಾಪವನ್ನ ಸೂಚಿಸಿದ್ದಾರೆ.