News

ಕಿರುತೆರೆಯ ಬಳಗದಿಂದ “ಪುನೀತ ಅಮರ” ಕಾರ್ಯಕ್ರಮ!

ಕಿರುತೆರೆಯ ಬಳಗದಿಂದ “ಪುನೀತ ಅಮರ” ಕಾರ್ಯಕ್ರಮ!
  • PublishedNovember 22, 2021

ಪುನೀತ್ ರಾಜಕುಮಾರ್‌ ಅವರ ನೆನಪಿನಲ್ಲಿ ‘ಪುನೀತ್‌ ಅಮರ’ ಎನ್ನುವ ಕಾರ್ಯಕ್ರಮವನ್ನು ‘ಕರ್ನಾಟಕ ಟೆಲಿವಿಶನ್ ಅಸೋಸಿಯೇಷನ್’ ಆಯೋಜಿಸುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನೆನಪಿಗಾಗಿ ‘ ಅಪ್ಪು ಅಮರ’ ಎಂಬ ಕಾರ್ಯಕ್ರಮವನ್ನು ‘ಕರ್ನಾಟಕ ಟೆಲಿವಿಶನ್ ಅಸೋಸಿಯೇಷನ್’ ಆಯೋಜಿಸುತ್ತಿದೆ. ನಟ ಪುನೀತ್‌ ರಾಜ್‌ಕುಮಾರ್‌ ಅವರ ನೆನಪಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.

ನ್ಯಾಷನಲ್ ಕಾಲೇಜ್ ಜಯನಗರ, H N ಕಲಾಕ್ಷೇತ್ರ ಸಭಾಂಗಣದಲ್ಲಿ ಈ ಕಾರ್ಯಕ್ರಮವನ್ನು ನಡೆಸಲು ಯೋಜನೆ ರೂಪಿಸಲಾಗಿದೆ. ಈ ಕಾರ್ಯಕ್ರಮವು ಇದೇ ತಿಂಗಳು ನವೆಂಬರ್ 28 ಭಾನುವಾರ ದಂದು ಸಂಜೆ 4 ಗಂಟೆಗೆ ಆರಂಭ ಆಗಲಿದೆ. ಕಿರುತೆರೆಯ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಎಲ್ಲಾ ಕಲಾವಿದರು, ತಂತ್ರಜ್ಞರು ಪುನೀತ್ ರಾಜ್‌ಕುಮಾರ್ ರವರಿಗೆ ನಮನ ಸಲ್ಲಿಸಲಿದ್ದಾರೆ. ಜೊತೆಗೆ ವಿನೂತನ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ.

ನಟ ಪುನೀತ್‌ ರಾಜಕುಮಾರ್ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ವಿನೂತನ ಕಾರ್ಯಕ್ರಮ ನಡೆಸಲಾಗುತ್ತದೆ.ಈಗಾಗಲೇ ಚಾಲ್ತಿಯಲ್ಲಿರುವ ಧಾರಾವಾಹಿಗಳ ನಿರ್ಮಾಣ ಸಂಸ್ಥೆಗಳು ಒಂದು ನಿರ್ಧಾರಕ್ಕೆ ಬಂದಿವೆ. ನವೆಂಬರ್ 28 ಈ ಕಾರ್ಯಕ್ರಮವನ್ನು ಎಲ್ಲಾ ಕಲಾವಿದರು ಸೇರಿ ಅದ್ಧೂರಿಯಾಗಿ ನಡೆಸಲು ಯೋಜನೆ ಹಾಕಿಕೊಂಡಿದ್ದಾರೆ.

Written By
Kannadapichhar

Leave a Reply

Your email address will not be published. Required fields are marked *