ವಿನೀಶ್ ರಾತ್ರಿ ಬೆಚ್ಚಿಬೀಳ್ತಿದ್ದ – ವಿಜಯಲಕ್ಷ್ಮಿ
ದರ್ಶನ್ ಅವರನ್ನು ಆರೆಸ್ಟ್ ಮಾಡಿದ ಸಂಧರ್ಭ ದಲ್ಲಿ ತನ್ನ ಮಗನ ಪರಿಸ್ಥಿತಿಯನ್ನು ವಿಜಯಲಕ್ಷ್ಮಿ ಅವರು ಹಂಚಿ ಕೊಂಡಿದ್ದಾರೆ. ಡಿ ಕಂಪನಿ ಅವರು ಮಾಡಿರುವ ಸಂದರ್ಶನದಲ್ಲಿ ಈ ವಿಷಯವನ್ನು ಮೊದಲ ಬಾರಿಗೆ ಬಹಿರಂಗ ಪಡಿಸಿದ್ದಾರೆ.
“ಅಮ್ಮ ಏನಾಯ್ತು ಅಪ್ಪ ಜೈಲಿಗೆ ಹೋಗ್ತಾರ? ಎಂದು ಗಾಬರಿಲಿ ಕೇಳಿದ ಆಗ ಅವನಿಗೆ 16 ವರ್ಷ ಅಷ್ಟೇ. ಅವನಿಗೆ ಪರಿಸ್ಥಿತಿಯನ್ನು ಹೇಗೆ ಅರ್ಥ ಮಾಡಿಸೋದು ಅಂತ ತಿಳಿಲಿಲ್ಲ. ದರ್ಶನ್ ಆರೆಸ್ಟ್ ಆದ್ಮೇಲೆ ಮದ್ಯ ರಾತ್ರಿ ಬೆಚ್ಚಿಬೀಳ್ತಿದ್ದ,ಅಳ್ತಿದ್ದ”ಎಂದು ಹೇಳಿದ್ದಾರೆ.
ದರ್ಶನ್ ಅವರಿಗೆ ತನ್ನ ಮಗ ವಿನೀಶ್ ಎಂದರೆ ಪಂಚ ಪ್ರಾಣ. ವಿನೀಶ್ ಕೂಡ ತನ್ನ ತಂದೆಯ ಮೇಲೆ ಅಪಾರ ಪ್ರೀತಿ ಇಟ್ಟು ಕೊಂಡಿದ್ದಾರೆ.ವಿನೀಶ್ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಆಗಾಗ ತನ್ನ ತಂದೆಯೊಂದಿಗೆ ಕಳೆದಿರುವ ಖುಷಿಯ ಕ್ಷಣಗಳನ್ನು ಪೋಸ್ಟ್ ಮುಖಾಂತರ ಹಂಚಿಕೊಳ್ಳುತ್ತಾರೆ.