ಸಸಿ ನೆಟ್ಟು ‘ಪುನೀತ್ ರಾಜಕುಮಾರ್’ ಹೆಸರಿಟ್ಟ ನಟ ವಿಶಾಲ್!
ಪುನೀತ್ ರಾಜಕುಮಾರ್ ಅವರ ಅಕಾಲಿಕ ಮರಣಾ ನಂತರ ಅವರ ಅಭಿಮಾನಿಗಳು ಸಾಕಷ್ಟು ದುಃಖದಲ್ಲಿದ್ದಾರೆ ಅವರ ಸ್ಮರಣಾರ್ಥ ಸಂಘ ಸಂಸ್ಥೆಗಳು ಅಪ್ಪು ಸ್ಮರಣೆಯ ಕಾರ್ಯಕ್ರಮಗಳನ್ನು ಮಾಡುತ್ತಿವೆ.
ಪುನೀತ್ ರಾಜಕುಮಾರ್ ಅಗಲಿಕೆಯಿಂದ ಇಡೀ ಚಿತ್ರೋದ್ಯಮ ದಿಗ್ಭ್ರಮೆಗೊಂಡಿದ್ದು ಆ ನೋವಿನಿಂದ ಹೊರ ಬರಲು ಸಾಧ್ಯವಾಗದೆ ಒದ್ದಾಡುತ್ತಿದೆ. ಇನ್ನು ಪುನೀತ್ ನಡೆಸುತ್ತಿದ್ದ ಸಾಮಾಜಿಕ ಕಾರ್ಯಗಳನ್ನು ಮುಂದುವರೆಸಲು ಸ್ವಯಂ ಆಗಿ ಮುಂದೆ ಬಂದು 1800 ವಿದ್ಯಾರ್ಥಿಗಳ ಶಿಕ್ಷಣದ ಸಂಪೂರ್ಣ ಹೊಣೆಯನ್ನು ಹೊತ್ತಿದ್ದ ತಮಿಳು ನಟ ವಿಶಾಲ್ ಪುನೀತ್ ಕನಸನ್ನು ಮುಂದುವರೆಸುವ ಹೊಣೆ ಹೊತ್ತುಕೊಂಡಿದ್ದರು. ಈಗ ತಮ್ಮ ‘ಎನಿಮಿ’ ಚಿತ್ರದ ಪ್ರಚಾರಾರ್ಥವಾಗಿ ಹೈದರಾಬಾದ್ಗೆ ತೆರಳಿದ್ದ ತಮಿಳು ಚಿತ್ರ ನಟ ವಿಶಾಲ್ ಗಿಡವೊಂದನ್ನು ನೆಟ್ಟು ‘ಶ್ರೀ ಪುನೀತ್ ರಾಜ್ ಕುಮಾರ್’ ಎಂದು ಹೆಸರಿಟ್ಟಿದ್ದಾರೆ.
****