ಅನೂಪ್ ಸೀಳಿನ್ ಸಂಗೀತದ ಬಸವಣ್ಣನ ವಚನಾಮೃತ ಉಳ್ಳವರು ಶಿವಾಲಯವ ಕೇಳಿ ಆನಂದಿಸಿ.. ನೋಡಿ ಆಸ್ವಾದಿಸಿ…
ಸಿದ್ಲಿಂಗು, ಎದ್ದೇಳು ಮಂಜುನಾಥ, ಗೂಳಿ ಹೀಗೆ ಅನೇಕ ಬ್ಲಾಕ್ ಬಸ್ಟರ್ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಅನೂಪ್ ಸೀಳಿನ್ ನ ಹೊಸ ಆಲ್ಬಮ್ ನ. 27 ರಂದು ಬಿಡುಗಡೆಯಾಗಿದೆ.
ಈ ಟ್ರ್ಯಾಕ್ ಜೆಪಿ ಮ್ಯೂಸಿಕ್ ಬ್ಯಾನರ್ ಅಡಿಯಲ್ಲಿ ಯೌಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು,ಮಸಣಿ ನಿರ್ದೇಶಿಸಿ,ಕೀರ್ತಿ ಬಿ. ಶೆಟ್ಟಿ ನಿರ್ಮಾಪಿಸಿದ್ದಾರೆ.
ಬಸವಣ್ಣನವರ ವಚನ
ತಮ್ಮ ತತ್ವಗಳನ್ನ ವಚನಗಳ ಮೂಲಕ ಜನರಿಗೆ ಸರಳ ರೂಪದಲ್ಲಿ ತಲುಪಿಸುತ್ತಿದ್ದವರು ಬಸವಣ್ಣವರು. ಅವರ ಪ್ರಸಿದ್ಧ ವಚನಗಳಲ್ಲಿ ‘ಉಳ್ಳವರ ಶಿವಾಲಯವ’ ಕೂಡ ಒಂದು.ಆ ಅದ್ಭುತ ವಚನಕ್ಕೆ ಈಗ ಅನೂಪ್ ಸೀಳಿನ್ ಧನಿಯಾಗಿದ್ದಾರೆ.
ವಚನಗಳಿಗೆ ಹೆಜ್ಜೆ
ಕಾರ್ತಿಕ್ ಬಿ. ಶೆಟ್ಟಿ ಯವರ ನೃತ್ಯ ನಿರ್ದೇಶನವು ಅದ್ಬುತವಾಗಿ ಮೂಡಿಬಂದಿದ್ದು, ವಚನಗಳ ಪ್ರತಿಯೊಂದು ಸಾಲನ್ನು ನಾಟ್ಯದ ಮೂಲಕ ಬ್ಯೂಟಿಫುಲ್ ಆಗಿ ತೋರಿಸಿದ್ದಾರೆ. ಬಸವಣ್ಣವರ ವಚನ, ಅನೂಪ್ ಸೀಳಿನ್ ನವರ ಧನಿ ಜೊತೆಗೆ ಹೆಜ್ಜೆಗಳ ಕಲರವವನ್ನು ನೆಟ್ಟಿಗರು ನೋಡಿ ತಂಡವನ್ನು ಹೊಗಳಿದ್ದಾರೆ.