ಅನುಶ್ರೀ ಕಾಲಿಗೆ ಬಿದ್ದ ಗಿಲ್ಲಿನಟ; ಆಮೇಲೆನಾಯ್ತು..?
ಗಿಲ್ಲಿ ಹಾಗೂ ಅನುಶ್ರೀ ಮೊದಲಿನಿಂದಲೂ ಕ್ಲೋಸ್. ಜೀ ಕನ್ನಡದಲ್ಲಿ ಇವರಿಬ್ಬರೂ ಒಟ್ಟಿಗೆ ಕೆಲಸ ಮಾಡಿದ್ರು ಇದ್ದಿದ್ದನ್ನು ಇದ್ದ ಹಾಗೆ ಕಾಣಬಹುದಾಗಿತ್ತು. ಇವರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಈ ಮೊದಲು ಕೂಡ ಗಿಲ್ಲಿ ಸಂದರ್ಶನದಲ್ಲಿ ಅನುಶ್ರೀಗೆ ಕಾಲ್ ಮಾಡಿ ಮಾತಾಡಿದ್ರು ಆಗ್ಲೂ ಅನುಶ್ರೀ ನಿನ್ನ ಮೀಟ್ ಮಾಡಬೇಕು ಕಣೋ ಅಂದಿದ್ರು..
ಹೌದು.. ಗಿಲ್ಲಿ ಬಿಗ್ ಬಾಸ್ ವಿನ್ನರ್ ಆದ್ಮೇಲೆ ಕ್ರೇಜ್ ಇನ್ನು ನಿಂತಿಲ್ಲ ಅಷ್ಟರ ಮಟ್ಟಿಗೆ ಜನ ಗಿಲ್ಲಿನಾ ಇಷ್ಟ ಪಡ್ತಿದ್ದಾರೆ.. ಈಗ ಅನುಶ್ರೀ ಹಾಗೂ ಗಿಲ್ಲಿ ಕನಕೋತ್ಸವದಲ್ಲಿ ಭೇಟಿ ಆಗೋ ಅವಕಾಶ ಸಿಕ್ಕಿದೆ. ಗಿಲ್ಲಿ ಸಾಕಷ್ಟು ವೇದಿಕೆ ಏರುತ್ತಿದ್ದಾರೆ. ಜನರು ಗಿಲ್ಲಿನ ತುಂಬಾ ಇಷ್ಟಪಡಲು ಪ್ರಾರಂಭ ಮಾಡಿದ್ದಾರೆ.. ಕನಕೋತ್ಸವ ವೇದಿಕೆ ಮೇಲೆ ಗಿಲ್ಲಿ ಹಾಗೂ ಅನುಶ್ರೀ ಪರಸ್ಪರ ಭೇಟಿ ಆದರು. ಆಗ ಅನುಶ್ರೀ ಕಾಲಿಗೆ ಬಿದ್ದು ಗಿಲ್ಲಿ ಆಶೀರ್ವಾದ ಪಡೆದು ಗಿಲ್ಲಿ ಖುಷಿಯಾದರು.
ಆ ವೇಳೆ ಅನುಶ್ರೀ ಖುಷಿಪಟ್ಟರು ಬಟ್ ಶಾಕ್ ಕೂಡ ಆಯಿತು. ಅನುಶ್ರೀ ಹಾಗೂ ಗಿಲ್ಲಿ ಪರಸ್ಪರ ಭೇಟಿ ಮಾಡಿದಾಗ ಸಾಕಷ್ಟು ಎಂಜಾಯ್ ಮಾಡುತ್ತಿದ್ದರಂತೆ. ಇದನ್ನು ಹೇಳಿಕೊಂಡಿದ್ದಾರೆ.
ಒಟ್ನಲ್ಲಿ ಗಿಲ್ಲಿ ಹಾಗೂ ಅನುಶ್ರೀ ನಡುವಿನ ಬಾಂಡಿಂಗ್ ಹೀಗೆ ಇರಲಿ ಅಂತಿದ್ದಾರೆ ಅವರ ಅಭಿಮಾನಿಗಳು..