ವಂಚನೆ ಕೇಸ್ನಲ್ಲಿ ಕನ್ನಡದ ಸ್ಟಾರ್ ಡೈರೆಕ್ಟರ್ ನಾಗಶೇಖರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, 50 ಲಕ್ಷ ವಂಚನೆ ಆಗಿದೆ ಅಂತ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ರಾಜರಾಜೇಶ್ವರಿನಗರ ಠಾಣೆಯಲ್ಲಿ ನಿರ್ದೇಶಕ ನಾಗಶೇಖರ್, ಆರ್.ಆರ್.ನಗರದ ಮೀನಾ, ರಾಜಕುಮಾರ್ ವಿರುದ್ಧ ದೂರು ಕೊಟ್ಟಿದ್ದು, ಜಯಣ್ಣಲೇಔಟ್ನಲ್ಲಿ ಮನೆ ಖರೀದಿಸಲು ಮುಂದಾಗಿದ್ದಾರೆ. ಹೀಗಾಗಿ ಮೀನಾರಿಂದ 2.70 ಕೋಟಿಗೆ ಮನೆ ಖರೀದಿಗೆ ಮಾತುಕತೆ ಕೂಡ ಆಗಿತ್ತು. 2020ರ ಆಗಸ್ಟ್ನಲ್ಲಿ ಸೇಲ್ ಅಗ್ರಿಮೆಂಟ್ ಮಾಡಿಕೊಂಡಿದ್ದ ನಾಗಶೇಖರ್, ಅಗ್ರಿಮೆಂಟ್ ಆಗುತ್ತಿದ್ದಂತೆ ಹಂತಹಂತವಾಗಿ 50 ಲಕ್ಷ ವರ್ಗಾಯಿಸಿದ್ದಾರೆ. ಸೇಲ್ ಅಗ್ರಿಮೆಂಟ್ ನಂತರ ಮೀನಾ ನಾಗಶೇಖರ್ ಗೆ ನೀಡಬೇಕಿದ್ದ ಮನೆಯನ್ನ ಬೇರೆಯವರಿಗೆ ಮಾರಿದ್ದಾರೆ.
ಹೀಗಾಗಿ ನಾಗಶೇಖರ್ ವರ್ಗಾಯಿಸಿದ್ದ 50 ಲಕ್ಷ ಹಣವನ್ನ ಮೀನಾ ವಾಪಸ್ ಮಾಡಿಲ್ಲ ಅಂತಾ ಈ ಬಗ್ಗೆ ನಿರ್ದೇಶಕ ದೂರು ನೀಡಿದ್ದು, RR ನಗರ ಠಾಣೆಯಲ್ಲಿ FIR ದಾಖಲಾಗ್ತಿದ್ದಂತೆ ಮೀನಾ ದಂಪತಿ ಎಸ್ಕೇಪ್ ಆಗಿದ್ದಾರೆ. ಇದೀಗ ಮನೆಯೂ ಸಿಗದೇ, ಹಣವೂ ವಾಪಸ್ ಬರದೇ ನಿರ್ದೇಶಕ ಕಂಗಾಲಾಗಿದ್ದಾರೆ.