ಪುನೀತ್ ರಾಜಕುಮಾರ್ ಅವರ ಅಗಲಿಕೆ ಇಡೀ ಸ್ಯಾಂಡಲ್ವುಡ್ಗೆ ನೋವು ತಂದಿದೆ. ಎಲ್ಲರೂ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಪ್ರತಿ ಸಿನಿಮಾಗಳ ಸುದ್ದಿಗೋಷ್ಠಿ ಮತ್ತು ಪ್ರೀ-ರಿಲೀಸ್ ಕಾರ್ಯಕ್ರಮಗಳಲ್ಲಿ ಪುನೀತ್ಗೆ ನಮನ ಸಲ್ಲಿಸಲಾಗುತ್ತಿದೆ. ಅವರನ್ನು ನೆನಪು ಮಾಡಿಕೊಳ್ಳದೇ ಯಾವ ಕಾರ್ಯಕ್ರಮವನ್ನೂ ಪ್ರಾರಂಭಿಸಲು ಮನಸ್ಸಾಗುವುದಿಲ್ಲ. ಅಷ್ಟರಮಟ್ಟಿಗೆ ಅಪ್ಪು ಅಗಲಿಕೆ ಎಲ್ಲರನ್ನೂ ಕಾಡುತ್ತಿದೆ.
ಸೋಮವಾರ (ನ.22) ನಡೆದ ‘ಸಖತ್’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ನಲ್ಲೂ ಪುನೀತ್ಗೆ ನಮನ ಸಲ್ಲಿಸಲಾಯಿತು. ‘ಗೋಲ್ಡನ್ ಸ್ಟಾರ್’ ಗಣೇಶ್ ಅಭಿನಯದ, ಸಿಂಪಲ್ ಸುನಿ ನಿರ್ದೇಶನದ ಈ ಸಿನಿಮಾ ನ.26ರಂದು ಬಿಡುಗಡೆ ಆಗಲಿದೆ. ‘ಚಿತ್ರರಂಗ ಇರುವವರೆಗೂ ಪವರ್ ಸ್ಟಾರ್ ಅವರೇ ನಂ.1 ಆಗಿರುತ್ತಾರೆ’ ಎನ್ನುವ ಮೂಲಕ ‘ಸಖತ್’ ಚಿತ್ರದ ವೇದಿಕೆಯಲ್ಲಿ ಪುನೀತ್ ರಾಜಕುಮಾರ್ ಬಗ್ಗೆ ಗಣೇಶ್ ಅವರು ಮನದ ಮಾತುಗಳನ್ನು ಹಂಚಿಕೊಂಡರು.
****