22.9 C
Bengaluru
Sunday, March 26, 2023
spot_img

ಸಂಚಾರಿ ವಿಜಯ್ ಗೆ ಸದನದಲ್ಲಿ ಸಂತಾಪ

ಇತ್ತೀಚಿಗಷ್ಟೆ ಅಪಘಾತದಲ್ಲಿ ನಮ್ಮನ್ನಗಲಿದ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಗೆ ವಿಧಾನಸಭೆಯಲ್ಲಿ ಸಂತಾಪ ಸೂಚನೆ ಮಾಡಲಾಯಿತು. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿಜಯ್​ ಸಾಧನೆ ಬಗ್ಗೆ ಮಾತನಾಡಿದರು. ರಾಷ್ಟ್ರ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಕರ್ನಾಟಕಕ್ಕೆ ಹೆಮ್ಮೆ ತಂದ ನಟನಿಗೆ ಸದನದಲ್ಲಿ ನಮನ ಸಲ್ಲಿಸಲಾಯಿತು. ಮಾಧುಸ್ವಾಮಿ ಸೇರಿದಂತೆ ಇನ್ನು ಕೆಲವರು ಸಂಚಾರಿ ವಿಜಯ್ ಬಗ್ಗೆ ಮಾತನಾಡಿ ಸಂತಾಪ ಸೂಚಿಸಿದರು.

ಖ್ಯಾತ ನಟ ಸಂಚಾರಿ ವಿಜಯ್​ ನಿಧನರಾಗಿದ್ದು ಇಡೀ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಅಪಘಾತದಿಂದ ಅವರು ಅಕಾಲಿಕ ಮರಣಕ್ಕೆ (ಜೂ.15) ಒಳಗಾದರು. ಈಗ ಸದನದಲ್ಲೂ ಸಂಚಾರಿ ವಿಜಯ್​ ಬಗ್ಗೆ ಪ್ರಸ್ತಾಪ ಆಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿಜಯ್​ ಸಾಧನೆ ಬಗ್ಗೆ ಮಾತನಾಡಿದರು.

ನಿನ್ನೆಯೇ ”ಸಂಚಾರಿ ವಿಜಯ್‌ ಅವರಿಗೆ ನಿನ್ನೆಯೇ ಸಂತಾಪ ಸಲ್ಲಿಸಬೇಕಾಗಿತ್ತು .ಆದ್ರೆ ಯಾಕೋ ಪಟ್ಟಿಯಲ್ಲಿರಲಿಲ್ಲ ಸಂಚಾರಿ ವಿಜಯ್‌ ಉತ್ತಮವಾದ , ಪ್ರತಿಭಾನ್ವಿತ ನಟರಾಗಿದ್ದರು” ಎಂದರು ಸಿದ್ದರಾಮಯ್ಯ.ರಾಷ್ಟ್ರ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಕರ್ನಾಟಕಕ್ಕೆ ಹೆಮ್ಮೆ ತಂದ ನಟನಿಗೆ ಸದನದಲ್ಲಿ ನಮನ ಸಲ್ಲಿಸಲಾಯಿತು.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles