News

ಸಾಂಸಾರಿಕ ಜೀವನದಿಂದ ಮುಕ್ತಿ ಪಡೆದು ಆಧ್ಯಾತ್ಮದ ಕಡೆ ವಾಲಿದ್ರಾ ಸಮಂತಾ..!

ಸಾಂಸಾರಿಕ ಜೀವನದಿಂದ ಮುಕ್ತಿ ಪಡೆದು ಆಧ್ಯಾತ್ಮದ ಕಡೆ ವಾಲಿದ್ರಾ ಸಮಂತಾ..!
  • PublishedOctober 23, 2021

ವಿಚ್ಛೇದನದ ನಂತರ ಹಲವು ಕಾರಣಗಳಿಗಾಗಿ ಸುದ್ದಿಯಲ್ಲಿರುವ ಸಮಂತಾ ರುತ್‌ ಪ್ರಭು ಅವರೀಗ ಆಧ್ಯಾತ್ಮದ ಕಡೆಗೆ ವಾಲುತ್ತಿರುವ ಲಕ್ಷಣಗಳು ಕಾಣುತ್ತಿವೆ. ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿರುವ ಚಿತ್ರವೊಂದು ಇದಕ್ಕೆ ಪುಷ್ಟಿ ನೀಡುತ್ತಿದೆ.

https://www.instagram.com/p/CVVF3XUoq4J/

ಹೌದು, ಸಮಂತಾ ಅವರೀಗ ರಿಷಿಕೇಶದಲ್ಲಿ ಕಾಲ ಕಳೆಯುತ್ತಿದ್ದಾರೆ. ಅವರ ಸ್ನೇಹಿತೆ ಹಾಗೂ ಮಾಡೆಲ್‌ ಆಗಿರುವ ಶಿಲ್ಪಾ ರೆಡ್ಡಿಯೊಂದಿಗೆ ಆಶ್ರಮವೊಂದನ್ನು ಸೇರಿದ್ದಾರೆ. ಈ ಕುರಿತ ಚಿತ್ರವೊಂದನ್ನು ಹಂಚಿಕೊಂಡಿರುವ ಸಮಂತಾ ಅವರು ರಿಷಿಕೇಶದಲ್ಲಿರುವ ಮಹರ್ಷಿ ಯೋಗಿ ಆಶ್ರಮದಲ್ಲಿ(ಬೀಟಲ್ಸ್‌ ಆಶ್ರಮ) ಇರುವುದಾಗಿ ತಿಳಿಸಿದ್ದಾರೆ. ಆಶ್ರಮದಲ್ಲಿ ಹೇಳಿಕೊಡುವ ‘ಅತೀಂದ್ರಿಯ ಧ್ಯಾನ’ದ ಕುರಿತಾಗಿಯೂ ಸಮಂತಾ ಬರೆದುಕೊಂಡಿದ್ದಾರೆ.2017 ರಲ್ಲಿ ನಾಗ ಚೈತನ್ಯ ಹಾಗೂ ಸಮಂತಾ ಮದುವೆಯಾಗಿದ್ದರು. ಅಕ್ಟೋಬರ್‌ 2ರಂದು ವಿಚ್ಛೇದನ ಘೋಷಿಸಿದ ನಂತರ ಸಮಂತಾ ಹೆಚ್ಚು ಸುದ್ದಿಯಲ್ಲಿದ್ದಾರೆ

Written By
Kannadapichhar

Leave a Reply

Your email address will not be published. Required fields are marked *