ಬಿಬಿಎಂಪಿ ಮುಖ್ಯ ಕಛೇರಿ ಆವರಣದಲ್ಲಿ ಪುನೀತ್ ಪುತ್ಥಳಿ..!
ನಟ ಪುನೀತ್ ರಾಜ್ ಕುಮಾರ್ ಅವರ ಪುತ್ಥಳಿಯನ್ನು ಬೆಂಗಳೂರಿನ ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ನಿರ್ಮಿಸುವಂತೆ ಪಾಲಿಕೆ ನೌಕರರ ಸಂಘ ಮನವಿ ಮಾಡಿದೆ.ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ ಪುತ್ಥಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭರವಸೆ ನೀಡಿದ್ದು ಸರ್ಕಾರದೊಂದಿಗೆ ಮಾತನಾಡುವ ಭರವಸೆ ವ್ಯಕ್ತಪಡಿಸಿದ್ದಾರೆ.
ಈಗ ಬಿಬಿಎಂಪಿ ಆವರಣದಲ್ಲಿ ಡಾ ರಾಜ್ ಕುಮಾರ್ ಅವರ ಪುತ್ಥಳಿ, ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿ ಸೇರಿದಂತೆ ಇನ್ನಿತರ 4 ಪುತ್ಥಳಿಗಳಿದ್ದು ಪುನೀತ್ ಪುತ್ಥಳಿ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿದೆ.
ಪುನೀತ್ ರಾಜಕುಮಾರ್ ಅವರ ಅಕಾಲಿಕ ಮರಣ ಕರುನಾಡ ಜನ ಮಮ್ಮಲ ಮರಗುವಂತೆ ಮಾಡಿದೆ. ಪುನೀತ್ ರಾಜಕುಮಾರ್ ಅವರ ಸರಳ ವ್ಯಕ್ತಿತ್ವಕ್ಕೆ ಅವರ ತಂದೆ ರಾಜಕುಮಾರ್ ಅವರೇ ಸ್ಪೂರ್ತಿ ಎಂದು ಹಲವು ಬಾರಿ ಪುನೀತ್ ನೆನೆದಿದ್ದುಂಟ್ಟು. ಈಗ ಬಿಬಿಎಂಪಿಯ ಪುನೀತ್ ಅವರ ಗೌರವಾರ್ಥ ಪುತ್ಥಳಿ ನಿರ್ಮಾಣ ಮಾಡುಲು ಉತ್ಸುಕವಾಗಿದೆ.
****