ಈ ಗಲಾಟೆ ಪ್ರಮೋಷನ್ ಗಿಮಿಕ್ ಅಲ್ಲ.. ಗುರು ದೇಶಪಾಂಡೆ, ನಿರ್ದೇಶಕ
‘ಲವ್ ಯೂ ರಚ್ಚು’ ಸಿನಿಮಾ ಇತ್ತೀಚೆಗೆ ವಿವಾದದ ಮೂಲಕ ಸಾಕಷ್ಟು ಸುದ್ದಿಯಾಗುತ್ತಿದೆ. ಹಲವು ಅಡೆತಡೆಗಳನ್ನು ದಾಟಿ ಸಿನಿಮಾ ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲೇ ಸಿನಿಮಾ ತಂಡದಲ್ಲಿ ವೈಮನಸ್ಸು ಮೂಡಿದೆ. ನಟ ಅಜಯ್ ರಾವ್ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ಅವರ ನಡುವೆ ಯಾವುದೂ ಸರಿ ಇಲ್ಲ ಎಂಬುದು ಸ್ಪಷ್ಟವಾಗಿದೆ.
ಇಂದು (ಡಿಸೆಂಬರ್ 25) ಸಿನಿಮಾದ ಸುದ್ದಿಗೋಷ್ಠಿ ಕರೆಯಲಾಗಿತ್ತು. ಈ ವೇಳೆ ಗುರು ದೇಶಪಾಂಡೆ ಅವರು ಈ ಬಗ್ಗೆ ಮಾತನಾಡಿದರು. ‘ನಾನು ಮತ್ತು ಅಜಯ್ ರಾವ್ ಕಿತ್ತಾಡೋದೇ ಸಿನಿಮಾ ಅಲ್ಲ. ಇದು ಪ್ರಮೋಷನ್ ಗಿಮಿಕ್ ಎಂದು ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ, ಇದು ಆ ರೀತಿ ಅಲ್ಲ. ಸಿನಿಮಾ ಬಗ್ಗೆ ಜನರಿಗೆ ಹೆಚ್ಚು ತಲುಪಿಸಬೇಕಿದೆ ತಂಡದಲ್ಲಿ ಒಬ್ಬರು ಬಂದಿಲ್ಲಾ ಅನ್ನೋ ವಿಚಾರವನ್ನು ಇಲ್ಲಿಗೆ ಬಿಡೋಣ’ ಎಂದಿದ್ದಾರೆ.
****